Saturday, June 2, 2018

ಶ್ರೀರಾಮ ಭುಜಂಗ ಪ್ರಯಾತ ಸ್ತೋತ್ರ



ಶ್ರೀರಾಮ ಭುಜಂಗ ಪ್ರಯಾತ ಸ್ತೋತ್ರ


ಶ್ಲೋಕ - 1 - ಸಂಸ್ಕೃತದಲ್ಲಿ :

ವಿಶುದ್ಧಂ ಪರಂ ಸಚ್ಚಿದಾನಂದರೂಪಂ
ಗುಣಾಧಾರಮಾಧಾರಹೀನಂ ವರೇಣ್ಯಮ್
ಮಹಾಂತಂ ವಿಭಾಂತಂ ಗುಹಾಂತಂ ಗುಣಾಂತಂ
ಸುಖಾಂತಂ ಸ್ವಯಂ ಧಾಮ ರಾಮಂ ಪ್ರಪದ್ಯೇ  
ಕನ್ನಡದಲ್ಲಿ :

ಪರಿಶುದ್ಧನುತ್ತಮ ಸಚ್ಚಿದಾನಂದ ರೂಪ
ಗುಣಾಧಾರ ನಿರಾಧಾರ ಸರ್ವಶ್ರೇಷ್ಟ
ಮಹಾಪುರುಷ ಜ್ಯೋತಿಸ್ವರೂಪೀ ಗುಣಾಢ್ಯ
ಸುಖಸೀಮ ತಾ ಧಾಮ ರಾಮಂಗೆ ಶರಣು

ವಿವರಣೆ :

ಯಾರಿಗೆ ಯಾವುದೇ ಆಧಾರವಿಲ್ಲವೋ, ಹೃದಯದಲ್ಲಿ ಪರಿಶುದ್ಧನೋ, ಯಾರು ಶಾಶ್ವತ ಸತ್ಯನೋ, ಯಾರು ಅಂತಿಮ ಸಂತೋಷದ ಮೂರ್ತೀಕೃತನೋ, ಗುಣಗಳನ್ನು ಮೀರಿದವನೋ, ಮಹಾಮಹಿಮನೋ, ಅವಿಭಾಜ್ಯನೋ, ಗುಣಗಳಲ್ಲಿ ಅಂತಿಮನೋ, ಯಾರು ಅಂತಿಮ ಸಂತೋಷಿಯೋ, ಆ ಶ್ರೀ ರಾಮಚಂದ್ರನಿಗೆ ನನ್ನ ಭಕ್ತಿಪೂರ್ವಕ ನಮನಗಳು.

ಶ್ಲೋಕ - 2 -  ಸಂಸ್ಕೃತದಲ್ಲಿ :

ಯದಾವರ್ಣಯತ್ಕರ್ಣಮೂಲೇsಂತಕಾಲೇ
ಶಿವೋ ರಾಮ ರಾಮೇತಿ ರಾಮೇತಿ ಕಾಶ್ಯಾಮ್
ತದೇಕಂ ಪರಂ ತಾರಕಬ್ರಹ್ಮರೂಪಂ
ಭಜೇsಹಂ ಭಜೇsಹಂ ಭಜೇsಹಂ ಭಜೇsಹಮ್
ಕನ್ನಡದಲ್ಲಿ :

ದೇಹಾಂತ ಕಾಲದೊಳು ಶಿವನು ಕಾಶಿಯಲಿ
ರಾಮರಾಮೆಂಬುವ ಮಂತ್ರವೊರೆವ ಕಿವಿಯಲ್ಲಿ
ಆ ತಾರಕೇಕೈಕ ಬ್ರಹ್ಮ ರೂಪನನು
ಭಜಿಸುವೆನು ಭಜಿಸುವೆನು ಭಜಿಸುವೆನು ನಾನು

ವಿವರಣೆ :

ತಾರಕ ಬ್ರಹ್ಮನ ಶಾಶ್ವತ ಮಹಾ ಸ್ವರೂಪವುಳ್ಳ ರೂಪವು ಶಂಕರ ಭಗವಾನನನ್ನು  ಕಾಶಿಯಲ್ಲಿರುವ ಭಕ್ತನ ಅಂತ್ಯ ಕಾಲದ ಸಮಯದಲ್ಲಿ ಕಿವಿಯಲ್ಲಿ " ರಾಮ, ರಾಮ, ರಾಮ " ಎಂದು  ಗುನುಗುನಿಸುವಂತೆ ಪ್ರೇರೇಪಿಸುತ್ತದೆ, ಆ ಬ್ರಹ್ಮನಿಗೆ ಭಕ್ತಿ ಪೂರ್ವಕವಾಗಿ ನಮಸ್ಕರಿಸುತ್ತೇನೆ.

ಶ್ಲೋಕ - 3 -  ಸಂಸ್ಕೃತದಲ್ಲಿ :

ಪುರಃ ಪ್ರಾಂಜಲೀನಾಂಜನೇಯಾದಿ ಭಕ್ತಾನ್
ಸ್ವಚಿನ್ಮುದ್ರಯಾ ಭದ್ರಯಾ ಬೋಧಯಂತಮ್
ಭಜೇsಹಂ ಭಜೇsಹಂ ಸದಾ ರಾಮಚಂದ್ರಂ
ತ್ವದನ್ಯಂ ನ ಮನ್ಯೇ ನ ಮನ್ಯೇ ನ ಮನ್ಯೇ      
ಕನ್ನಡದಲ್ಲಿ :

ಮುಂದೆ ಕೈಮುಗಿದಾಂಜನೇಯಾದಿ ಭಕ್ತರಿಗೆ
ಚಿನ್ಮುದ್ರೆಯಿಂ ಮಂಗಳ ಬೋಧೆಯೀವ
ಶ್ರೀರಾಮ ಚಂದ್ರನನು ಭಜಿಪೆಂ ಸದಾ ನಾಂ
ಬೇರೊಂದನೊಲ್ಲೆ ನಾನೊಲ್ಲೆ ನಾನೊಲ್ಲೆ

ವಿವರಣೆ :

ಯಾರನ್ನು ಸದಾ ನಮಸ್ಕರಿಸುವ ಆಂಜನೇಯ ಹಾಗೂ ಅನೇಕ ಭಕ್ತರು ಸದಾ ಸುತ್ತುವರೆದಿರುವರೋ ಮತ್ತು ಶಾಶ್ವತ ಜ್ಞಾನವನ್ನು ಅದರ ಲಾಂಛನವನ್ನು ತನ್ನ ಹಸ್ತದಲ್ಲಿ ಇರಿಸಿಕೊಂಡು ಬೋಧಿಸುತ್ತಿರುವನೋ ಆ ಶ್ರೀ ರಾಮಚಂದ್ರನನ್ನು ಸದಾ ಭಕ್ತಿಯಿಂದ ನಮಸ್ಕರಿಸುವೆ ಹಾಗೂ ಅವನನ್ನು ಹೊರತು ಪಡಿಸಿ ಬೇರಾರನ್ನೂ ಕನಸಿನಲ್ಲೂ ಯೋಚಿಸಲಾರೆ.

ಶ್ಲೋಕ - 4 -  ಸಂಸ್ಕೃತದಲ್ಲಿ :

ಯದಾ ಮತ್ಸಮೀಪಂ ಕೃತಾಂತಸ್ಸಮೇತ್ಯ
ಪ್ರಚಂಡೈಶ್ಚ ಕೋಪೈರ್ಭಟೈರ್ಭೀಷಯೇನ್ಮಾಮ್
ತದಾವಿಷ್ಕರೋಷಿ ತ್ವದೀಯಂ ಸ್ವರೂಪಂ
ಸದಾಪತ್ಪ್ರಣಾಶಂ ಸಕೋದಂಡಬಾಣಮ್    
ಕನ್ನಡದಲ್ಲಿ :

ಯಮರಾಜನೊಂದಿಗೇ ಭಟರು ಬಳಿ ಬಂದು
ಅತ್ಯುಗ್ರಕೋಪದಿಂ ಹೆದರಿಸಲು ನನ್ನ
ಆಪತ್ತುಗಳನೆಲ್ಲ ನಾಶಗೈಯುವ ನಿನ್ನ
ಕೋದಂಡ ಬಾಣಗಳ ಶಕ್ತಿ ತೋರಿಸುವೆ

ವಿವರಣೆ :

ಕಾಲ ಯಮನು ತನ್ನ ಕೋಪೋದ್ರಿಕ್ತ ಬಟರೊಂದಿಗೆ ನನ್ನೆದುರು ಬಂದು ನನ್ನನ್ನು ಹೆದರಿಸುವಾಗ ಹೇ ರಾಮಚಂದ್ರನೇ ಆ ಸಮಯದಲ್ಲಿ ನೀನು ನಿನ್ನ ಕೋದಂಡ ಬಾಣದೊಡನೆ ನನ್ನೆದುರು ಪ್ರತ್ಯಕ್ಷನಾಗು, ಆಗ ಅದು ನನ್ನಲ್ಲಿನ ಎಲ್ಲ ಭಯವನ್ನೂ ಹೋಗಲಾಡಿಸು ವುದು.

ಶ್ಲೋಕ - 5 -  ಸಂಸ್ಕೃತದಲ್ಲಿ :

ನಿಜೇ ಮಾನಸೇ ಮಂದಿರೇ ಸನ್ನಿಧೇಹಿ
ಪ್ರಸೀದ ಪ್ರಸೀದ ಪ್ರಭೋ ರಾಮಚಂದ್ರ
ಸಸೌಮಿತ್ರಿಣಾ ಕೈಕಯೀನಂದನೇನ
ಸ್ವಶಕ್ತ್ಯಾನುಭಕ್ತ್ಯಾ ಚ ಸಂಸೇವ್ಯಮಾನ    
ಕನ್ನಡದಲ್ಲಿ :

ಸೌಮಿತ್ರಿ ಭರತನಿಂ ಭಕ್ತಗಣದಿಂದ
ಸೀತೆಯೊಂದಿಗೆ ಸೇವೆಗೊಳ್ಳುತಿಹ ಸ್ವಾಮಿ
ಎನ್ನ ಮಾನಸಮಂದಿರದಲ್ಲಿ ನೆಲೆಸು
ಕೃಪೆದೋರು ಕೃಪೆದೋರು ಶ್ರೀರಾಮಚಂದ್ರ

ವಿವರಣೆ :

ಹೇ ರಾಮಚಂದ್ರನೇ ನನ್ನ ನೈಜ ಮನದಲ್ಲಿ ನೀನು ಹಾಗೂ ನಿನ್ನ ಸಹೋದರರಾದ ಲಕ್ಷ್ಮಣ, ಭರತ, ಶತೃಘ್ನರೊಂದಿಗೆ ಬಂದು ಅಲ್ಲೇ ನೆಲೆಸಿ ನಿನ್ನ ಅಪಾರವಾದ ಶಕ್ತಿಯಿಂದ ನಿನ್ನ ಭಕ್ತನಾದ ನನಗೆ ಸಹಾಯಮಾಡಿ ನನ್ನನ್ನು ಸಂತೋಷಪಡಿಸು.

ಶ್ಲೋಕ - 6 - ಸಂಸ್ಕೃತದಲ್ಲಿ :

ಸ್ವಭಕ್ತಾಗ್ರಗಣ್ಯೈಃ ಕಪೀಶೈರ್ಮಹೀಶೈ-
ರನೀಕೈರನೇಕೈಶ್ಚ ರಾಮ ಪ್ರಸೀದ
ನಮಸ್ತೇ ನಮೋsಸ್ತ್ವೀಶ ರಾಮ ಪ್ರಸೀದ
ಪ್ರಶಾಧಿ ಪ್ರಶಾಧಿ ಪ್ರಕಾಶಂ ಪ್ರಭೋ ಮಾಮ್  
ಕನ್ನಡದಲ್ಲಿ :

ಕಪಿಶ್ರೇಷ್ಟರೊಡಗೂಡಿ ಭಕ್ತರಾಜರೊಡಗೂಡಿ
ಅನೇಕಾನೇಕ ಸೇನೆಯೊಡನೆ ಮೈದೋರು
ನಮಸ್ತೇ ನಮೋ ಒಡೆಯ ರಾಮ ಮೈದೋರು
ಶಿಕ್ಷಣವನೀ ಜ್ಞಾನ ನೀಡೆನಗೆ ಸ್ವಾಮಿ

ವಿವರಣೆ :

ಮಹಾ ದೈವಭಕ್ತರು, ಮಹಾ ವಾನರ ರಾಜರುಗಳು, ಹಾಗೂ ಅನೇಕ ರಾಜ, ಮಹಾರಾಜರುಗಳು ಸುತ್ತುವರೆದಿರುವ ಓ ರಾಮಚಂದ್ರನೇ ! ನಿನಗೆ ನನ್ನ ಭಕ್ತಿಪೂರ್ವಕ ನಮಸ್ಕಾರಗಳು, ನನ್ನಲ್ಲಿ ಸುಪ್ರೀತನಾಗು, ಓ ದೇವನೇ ! ನನ್ನನ್ನು ಆಶೀರ್ವದಿಸು.

ಶ್ಲೋಕ - 7 - ಸಂಸ್ಕೃತದಲ್ಲಿ :

ನಮಸ್ಸಚ್ಚಿದಾನಂದರೂಪಾಯ ತಸ್ಮೈ
ನಮೋ ದೇವದೇವಾಯ ರಾಮಾಯ ತುಭ್ಯಮ್
ನಮೋ ಜಾನಕೀಜೀವಿತೇಶಾಯ ತುಭ್ಯಂ
ನಮಃ ಪುಂಡರೀಕಾಯತಾಕ್ಷಾಯ ತುಭ್ಯಮ್   
ಕನ್ನಡದಲ್ಲಿ :

ನಮೋ ಸಚ್ಚಿದಾನಂದ ರೂಪೆ ನಿನಗೆ
ನಮೋ ದೇವ ದೇವ ಸಿರಿರಾಮ ನಿನಗೆ
ನಮೋ ಜಾನಕಿಯ ಜೀವದೊಡೆಯ ನಿನಗೆ
ನಮೋ ಕಮಲವನು ಪೋಲ್ವ ಕಣ್ಣವನೆ ನಿನಗೆ

ವಿವರಣೆ :

ಸಚ್ಚಿದಾನಂದ ಸ್ವರೂಪನಾದ ದೇವನಿಗೆ ವಂದನೆಗಳು, ಜಾನಕಿರಮಣನಾದ ಭಗವಾನ್ ರಾಮಚಂದ್ರನಿಗೆ, ಹಾಗೂ ಉದರದಲ್ಲಿ ಪದ್ಮವನ್ನು ಧರಿಸಿರುವ ರಾಮನಿಗೆ ನಮಸ್ಕಾರಗಳು.

ಶ್ಲೋಕ - 8 - ಸಂಸ್ಕೃತದಲ್ಲಿ :

ನಮೋ ಭಕ್ತಿಯುಕ್ತಾನುರಕ್ತಾಯ ತುಭ್ಯಂ
ನಮಃ ಪುಣ್ಯಪುಂಜೈಕಲಭ್ಯಾಯ ತುಭ್ಯಮ್
ನಮೋ ವೇದವೇದ್ಯಾಯ ಚಾದ್ಯಾಯ ಪುಂಸೇ
ನಮಃ ಸುಂದರಾಯೇಂದಿರಾವಲ್ಲಭಾಯ           
ಕನ್ನಡದಲ್ಲಿ :

ಭಕ್ತರಲಿ ಅನುರಕ್ತ ನಿನಗೆ ನಮನ
ಪುಣ್ಯಬಲದಿಂದಷ್ಟೆ ಲಭಿಸುವನೆ ನಮನ
ವೇದದಿಂ ತಿಳಿವವನೆ ಆದಿಪುರುಷನೆ ನಮನ
ಸುಂದರನೆ ಇಂದಿರಾವಲ್ಲಭನೆ ನಮನ

ವಿವರಣೆ :

ಭಕ್ತರನ್ನು ಪ್ರೀತಿಸುವ ಭಗವಂತನಿಗೆ ನಮಸ್ಕಾರಗಳು, ಪುಣ್ಯಕಾರ್ಯಗಳ ಮೂಲಕ ಮಾತ್ರ ಹೊಂದಬಹುದಾದ ಆ ದೇವನಿಗೆ ಅನಂತ ಪ್ರಣಾಮಗಳು. ಯುಗದ ಆದಿಪುರುಷ ಹಾಗೂ ವೇದಗಳ ದೈವನಿಗೆ ಭಕ್ತಿಪೂರ್ವಕ ವಂದನೆಗಳು. ಸೌಂದರ್ಯದ ಪ್ರತಿರೂಪ ಹಾಗೂ ಜನಕರಾಜನ ಪುತ್ರಿಯ ರಮಣನಿಗೆ ಅನೇಕ ನಮಸ್ಕಾರಗಳು.

ಶ್ಲೋಕ - 9 - ಸಂಸ್ಕೃತದಲ್ಲಿ :

ಶೀಲಾsಪಿ ತ್ವದಂಘ್ರಿಕ್ಷಮಾಸಂಗಿರೇಣು-
ಪ್ರಸಾದಾದ್ಧಿ  ಚೈತನ್ಯಮಾಧತ್ತ ರಾಮ
ನರಸ್ತ್ವತ್ಪದದ್ವಂದ್ವಸೇವಾವಿಧಾನಾತ್
ಸುಚೈತನ್ಯಮೇತೀತಿ ಕಿಂ ಚಿತ್ರಮತ್ರ            
ಕನ್ನಡದಲ್ಲಿ :

ಓ ರಾಮ ನಿನಪಾದ ಧೂಳ ದೆಸೆಯಿಂದ
ಚೈತನ್ಯ ಪಡೆದಿತ್ತು ಶಿಲೆ ಕೂಡ ನೋಡ
ಆ ಪಾದಯುಗ್ಮವನು ಸೇವಿಸುತ ನರನು
ಶಕ್ತಿಯನು ಪಡೆವನೆನಲೇನು ಸೋಜಿಗವು

ವಿವರಣೆ :

ಹೇ ರಾಮಚಂದ್ರನೇ ! ಕೇವಲ ನಿನ್ನ ಪಾದ ಧೂಳಿನಿಂದ ಸಾಮಾನ್ಯ ಬಂಡೆಯು ಜೀವವನ್ನು ಮರಳಿ ಪಡೆಯಿತು, ನಿನಗೆ ನಮಸ್ಕರಿಸಿ ನಿನ್ನ ಪಾದ ಸೇವೆಯಿಂದ ಭಕ್ತರಿಗೆ ಮುಕ್ತಿದೊರಕಿದರೆ ಅದರಲ್ಲಿ ಆಶ್ಚರ್ಯಕರವಾದದ್ದು ಏನು?

ಶ್ಲೋಕ - 10 - ಸಂಸ್ಕೃತದಲ್ಲಿ :

ಪವಿತ್ರಂ ಚರಿತ್ರಂ ವಿಚಿತ್ರಂ ತ್ವದೀಯಂ
ನರಾ ಯೇ ಸ್ಮರಂತ್ಯನ್ವಹಂ ರಾಮಚಂದ್ರ
ಭವಂತಂ ಭವಾಂತಂ ಭರಂತಂ ಭಜಂತೋ
ಲಭಂತೇ ಕೃತಾಂತಂ ನ ಪಶ್ಯಂತ್ಯತೋsoತೇ   
ಕನ್ನಡದಲ್ಲಿ :

ಪವಿತ್ರವು ವಿಚಿತ್ರವು ನಿನ್ನಯ ಚರಿತ್ರೆ
ಸಂಸಾರ ನಾಶಕನೆ ಪೋಷಕನೆ ರಾಮ
ದಿವರಾತ್ರಿಯಲಿ ನರನು ನೆನೆಯುತ್ತ ನಿನ್ನ
ಭಜಿಸುತಿರೆ ಮರೆವನವ ಯಮನ ಭಯವನ್ನ

ವಿವರಣೆ :

ಹೇ ರಾಮನೇನಿನ್ನ ಆಶ್ಚರ್ಯಕರವಾದ ಚರಿತ್ರೆಯನ್ನು ಸದಾ ನೆನಸುವ ಭಕ್ತರು ಮತ್ತು ನಿನ್ನ ನಾಮವನ್ನು ಭಜಿಸುವವರು, ದುಃಖದಿಂದ ಕೂಡಿದ ಸಾಂಸಾರಿಕ ಜೀವನವನ್ನು ನಾಶಪಡಿಸುವ ನಿನ್ನನ್ನು ಪೂಜಿಸಿ ತಮ್ಮ ಅಂತ್ಯ ಕಾಲದಲ್ಲಿ ತಾವು ಇಚ್ಚಿಸಿದ್ದನ್ನು ಪಡೆಯುವರು ಹಾಗೂ ಯಮನ ಭಯವನ್ನು ನಿವಾರಿಸಿಕೊಳ್ಳುವರು.

ಶ್ಲೋಕ - 11 -  ಸಂಸ್ಕೃತದಲ್ಲಿ :

ದಶಗ್ರೀವಮುಗ್ರಂ ಸಪುತ್ರಂ ಸಮಿತ್ರಂ
ಸರಿದ್ದುರ್ಗಮಧ್ಯಸ್ಥರಕ್ಷೋಗಣೇಶಮ್
ಭವಂತಂ ವಿನಾ ರಾಮ ವೀರೋ ನರೋ ವಾ-
sಸುರೋ ವಾsಮರೋ ವಾ ಜಯೇತ್ಕಸ್ತ್ರಿಲೋಕ್ಯಾಮ್
ಕನ್ನಡದಲ್ಲಿ :

ಪುತ್ರಮಿತ್ರರ ಕೂಡಿ ಶರಧಿಕೋಟೆಯಳಿದ್ದ
ರಾಕ್ಷಸಗಣೇಶ್ವರನ ಉಗ್ರ ದಶಮುಖನ
ನಿನ್ನ ಬಿಟ್ಟಾವ ಕಲಿ ನರರು ಸುರರಸುರರು
ಗೆಲಲು ಸಾಧ್ಯವು ರಾಮ ಮೂಲೋಕದಲ್ಲಿ

ವಿವರಣೆ :

ಓ ರಾಮಚಂದ್ರನೇ ! ನಿನ್ನನ್ನು ಬಿಟ್ಟು ವಿಶ್ವದಲ್ಲಿ ಬೇರಾರೂ ಶೂರರೂ ಅಥವಾ ವೀರರೂ ಅಥವಾ ದೇವತೆಗಳಿಗೂ, ದಶಮುಖ ರಾವಣ ಹಾಗೂ ಅವನ ರಾಕ್ಷಸ ಗಣಗಳನ್ನು ಸಂಹಾರ ಮಾಡಲು ಸಾಧ್ಯವೇ ?

ಶ್ಲೋಕ - 12 - ಸಂಸ್ಕೃತದಲ್ಲಿ :

ಸದಾ ರಾಮ ರಾಮೇತಿ ರಾಮಾಮೃತಂ ತೇ
ಸದಾರಾಮಮಾನಂದನಿಷ್ಯಂದಕಂದಮ್
ಪಿಬಂತಂ ನಮಂತಂ ಸುದಂತಂ ಹಸಂತಂ
ಹನೂಮಂತಮಂತರ್ಭಜೇ ತಂ ನಿತಾಂತಮ್  
ಕನ್ನಡದಲ್ಲಿ :

ಶಾಂತಿ ಆನಂದಗಳ ಹೊಮ್ಮಿಸುವ ದಿವ್ಯ
ರಾಮಾಮೃತವನು ಸದಾ ರಾಮರಾಮೆನುತ
ಸೇವಿಸುತ ನಗುನಗುತ ನಮಿಸುತಿಹ ಸುದತಿ
ಆ ಹನುಮನನು ಭಜಿಪೆ ಮನದಲ್ಲಿ ಸತತ

ವಿವರಣೆ :

ಹೇ ರಾಮಚಂದ್ರ ಪ್ರಭುವೇ ! ನಿನ್ನನ್ನು ಸದಾ " ರಾಮ, ರಾಮಎಂದು ಭಜಿಸಿ ರಾಮನಾಮಾಮೃತವನ್ನು ಸದಾ ಕುಡಿಯುತ್ತಾ ಸದಾ ಆನಂದದ ಕಡಲಿನಲ್ಲಿನ ಅಲೆಗಳಲ್ಲಿ ಮೀಯುತ್ತಾ ನಿನಗೆ ಪದೇ ಪದೇ ನಮಸ್ಕರಿಸುತ್ತಾ ಸದಾ ಹಸನ್ಮುಖಿಯಾಗಿರುವ ಹುನುಮನನ್ನು ನಾನು ಸದಾ ಪೂಜಿಸುತ್ತೇನೆ.

ಶ್ಲೋಕ - 13 -  ಸಂಸ್ಕೃತದಲ್ಲಿ :

ನಮಸ್ತೇ ಸುಮಿತ್ರಾಸುಪುತ್ರಾಭಿವಂದ್ಯ
ನಮಸ್ತೇ ಸದಾ ಕೈಕಯೀನಂದನೇಡ್ಯ
ನಮಸ್ತೇ ಸದಾ ವಾನರಾಧೀಶವಂದ್ಯ
ನಮಸ್ತೇ ನಮಸ್ತೇ ಸದಾ ರಾಮಚಂದ್ರ            
ಕನ್ನಡದಲ್ಲಿ :

ಸುಮಿತ್ರಾ ಸುಪುತ್ರನಿಂ ವಂದಿತನ ನಮಿಪೆ
ಕೈಕೇಯಿ ನಂದನನು ಸ್ತುತಿಸುವನ ನಮಿಪೆ
ಸದಾ ವಾನರಾಧೀಶ ನಮಿಸುವನ ನಮಿಪೆ
ನಮಿಪೆ ನಿನ್ನನು ನಮಿಪೆ ಸದಾ ರಾಮಚಂದ್ರ

ವಿವರಣೆ :

ಸುಮಿತ್ರಾನಂದನನೆಂದು ಪೂಜಿಸಲ್ಪಡುವ ಶ್ರೀರಾಮನಿಗೆ ನಮಸ್ಕಾರಗಳು, ಕೈಕೇಯಿ ಪುತ್ರನಾದ ಭರತನಿಂದ ಸದಾ ಗೌರವಿಸಲ್ಪಡುವ ಶ್ರೀ ರಾಮಚಂದ್ರ ಪ್ರಭುವಿಗೆ ಭಕ್ತಿಪೂರ್ವಕ ನಮನಗಳು, ವಾನರ ರಾಜನ ಸದಾ ಸಖನಾದ ಶ್ರೀರಾಮನಿಗೆ ಅನೇಕ ವಂದನೆಗಳು. ಹೇ ರಾಮಚಂದ್ರ ಪ್ರಭುವೇ ನಿನಗೆ ಸದಾ ವಂದನೆಗಳು.

ಶ್ಲೋಕ - 14 -  ಸಂಸ್ಕೃತದಲ್ಲಿ :

ಪ್ರಸೀದ ಪ್ರಸೀದ ಪ್ರಚಂಡ ಪ್ರತಾಪ
ಪ್ರಸೀದ ಪ್ರಸೀದ ಪ್ರಚಂಡಾರಿಕಾಲ
ಪ್ರಸೀದ ಪ್ರಸೀದ ಪ್ರಪನ್ನಾನುಕಂಪಿನ್
ಪ್ರಸೀದ ಪ್ರಸೀದ ಪ್ರಭೋರಾಮಚಂದ್ರ            
ಕನ್ನಡದಲ್ಲಿ :

ಪ್ರಚಂಡ ಪ್ರತಾಪಿ ಕೃಪೆದೋರು ಕೃಪೆದೋರು
ಅತ್ಯುಗ್ರ ಶತ್ರುಯಮ ಕೃಪೆದೋರು ಕೃಪೆದೋರು
ಮೊರೆಹೊಕ್ಕವರ ಕಾಯ್ವ ಕೃಪೆದೋರು ಕೃಪೆದೋರು
ಪ್ರಭು ರಾಮಚಂದಿರನೆ ಕೃಪೆದೋರು ಕೃಪೆದೋರು

ವಿವರಣೆ :

ನಿನ್ನ ಕರುಣೆಯ ವರ್ಷಧಾರೆಯನ್ನು ಹರಿಸು ಅಧಿಕ ಗೌರವವುಳ್ಳ, ಹೇ ದೇವನೆಶತ್ರುಗಳಿಗೆ ಯಮಪ್ರಾಯನಾದವನೇ ಕರುಣೆದೋರು, ಭಕ್ತರಲ್ಲಿ ಅಧಿಕ ಕರುಣೆಯುಳ್ಳವನೇ ಕೃಪೆತೋರು, ಕೃಪೆತೋರು. ಓ ರಾಮಚಂದ್ರ ಪ್ರಭುವೇ ಕೃಪೆತೋರು, ಕೃಪೆತೋರು.

ಶ್ಲೋಕ - 15 - ಸಂಸ್ಕೃತದಲ್ಲಿ :

ಭುಜಂಗಪ್ರಯಾತಂ ಪರಂ ವೇದಸಾರಂ
ಮುದಾ ರಾಮಚಂದ್ರಸ್ಯ ಭಕ್ತ್ಯಾ ಚ ನಿತ್ಯಮ್
ಪಠನ್ ಸಂತತಂ ಚಿಂತಯನ್ ಸ್ವಾಂತರಂಗೇ
ಸ ಏವ ಸ್ವಯಂ ರಾಮಚಂದ್ರಃ ಸ ಧನ್ಯಃ          
ಕನ್ನಡದಲ್ಲಿ :

ವೇದಸಾರವು ಶ್ರೇಷ್ಠವೀ ಭುಜಂಗಪ್ರಯಾತವನು
ಶ್ರೀರಾಮ ಸ್ತೋತ್ರವನು ಹರುಷದಲಿ ನಿತ್ಯ
ಪಠಿಸುತ್ತ ನಿನ್ನೊಳಗೆ ನಿರುತ ನೆನೆವಾತ
ನಿಜದಿ ರಾಮಚಂದಿರನಹನು ಬಹುಧನ್ಯನಾತ

ವಿವರಣೆ :

ರಾಮಚಂದ್ರಪ್ರಭುವಿನ ವೇದಗಳ ಸಾರವಾದ ಭುಜಂಗ ಪ್ರಯಾತ ಸ್ತೋತ್ರವನ್ನು ಪ್ರತಿದಿನವೂ ಮನದಲ್ಲಿ ಸದಾ ಧ್ಯಾನಿಸುವವರಿಗೆ, ಪಠಿಸುವವರಿಗೆ ರಾಮಚಂದ್ರನ ಆಶೀರ್ವಾದವು ಸದಾ ಸಿಗುವುದು ಹಾಗೂ ಅವನೇ ಧನ್ಯ.

ಲೇಖನದ ಮೂಲಗಳು:
ಸಂಸ್ಕೃತ ಶ್ಲೋಕಗಳು : sanskritdocument.org
ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ ಅವರ “ಸವಿಗನ್ನಡ ಸ್ತೋತ್ರಚಂದ್ರಿಕೆ “
ವಿವರಣೆ: sanskritdocument.org – ಆಂಗ್ಲ ಭಾಷೆಯಲ್ಲಿನ ವಿವರಣೆಯ ಭಾವಾರ್ಥವನ್ನು ಕನ್ನಡದಲ್ಲಿ ಪ್ರಸ್ತುತಿ – ಗುರುಪ್ರಸಾದ್ ಹಾಲ್ಕುರಿಕೆ












No comments:

Post a Comment

ಶಿವಾಪರಾಧ ಕ್ಷಮಾಪಣ ಸ್ತೋತ್ರ

ಶಿವಾಪರಾಧ ಕ್ಷಮಾಪಣ ಸ್ತೋತ್ರ ಪ್ರಸ್ತಾವನೆ : ಅಪರಾಧ ಸ್ತೋತ್ರವೆಂದರೇನು? ಇದು ಅಪರಾಧಿಯ ಪ್ರಾಯಶ್ಚಿತ್ತ ಹಾಗೂ ಕ್ಷಮೆಯನ್ನು ಕೋರುವ ಸ್ತೋತ್ರ. ಶಿವಾಪರಾಧ ಕ್ಷಮ...