ಶ್ರೀರಾಮ ಭುಜಂಗ ಪ್ರಯಾತ ಸ್ತೋತ್ರ
|
ಶ್ಲೋಕ - 1 - ಸಂಸ್ಕೃತದಲ್ಲಿ :
ವಿಶುದ್ಧಂ ಪರಂ ಸಚ್ಚಿದಾನಂದರೂಪಂ
ಗುಣಾಧಾರಮಾಧಾರಹೀನಂ ವರೇಣ್ಯಮ್
ಮಹಾಂತಂ ವಿಭಾಂತಂ ಗುಹಾಂತಂ ಗುಣಾಂತಂ
ಸುಖಾಂತಂ ಸ್ವಯಂ ಧಾಮ ರಾಮಂ ಪ್ರಪದ್ಯೇ
|
ಕನ್ನಡದಲ್ಲಿ :
ಪರಿಶುದ್ಧನುತ್ತಮ ಸಚ್ಚಿದಾನಂದ ರೂಪ
ಗುಣಾಧಾರ ನಿರಾಧಾರ ಸರ್ವಶ್ರೇಷ್ಟ
ಮಹಾಪುರುಷ ಜ್ಯೋತಿಸ್ವರೂಪೀ ಗುಣಾಢ್ಯ
ಸುಖಸೀಮ ತಾ ಧಾಮ ರಾಮಂಗೆ ಶರಣು
|
ವಿವರಣೆ :
ಯಾರಿಗೆ ಯಾವುದೇ ಆಧಾರವಿಲ್ಲವೋ, ಹೃದಯದಲ್ಲಿ ಪರಿಶುದ್ಧನೋ, ಯಾರು ಶಾಶ್ವತ ಸತ್ಯನೋ,
ಯಾರು ಅಂತಿಮ ಸಂತೋಷದ ಮೂರ್ತೀಕೃತನೋ, ಗುಣಗಳನ್ನು ಮೀರಿದವನೋ,
ಮಹಾಮಹಿಮನೋ, ಅವಿಭಾಜ್ಯನೋ, ಗುಣಗಳಲ್ಲಿ ಅಂತಿಮನೋ, ಯಾರು ಅಂತಿಮ ಸಂತೋಷಿಯೋ, ಆ ಶ್ರೀ ರಾಮಚಂದ್ರನಿಗೆ ನನ್ನ ಭಕ್ತಿಪೂರ್ವಕ ನಮನಗಳು.
|
ಶ್ಲೋಕ - 2 - ಸಂಸ್ಕೃತದಲ್ಲಿ
:
ಯದಾವರ್ಣಯತ್ಕರ್ಣಮೂಲೇsಂತಕಾಲೇ
ಶಿವೋ ರಾಮ ರಾಮೇತಿ ರಾಮೇತಿ ಕಾಶ್ಯಾಮ್
ತದೇಕಂ ಪರಂ ತಾರಕಬ್ರಹ್ಮರೂಪಂ
ಭಜೇsಹಂ ಭಜೇsಹಂ ಭಜೇsಹಂ ಭಜೇsಹಮ್
|
ಕನ್ನಡದಲ್ಲಿ :
ದೇಹಾಂತ ಕಾಲದೊಳು ಶಿವನು ಕಾಶಿಯಲಿ
ರಾಮರಾಮೆಂಬುವ ಮಂತ್ರವೊರೆವ ಕಿವಿಯಲ್ಲಿ
ಆ ತಾರಕೇಕೈಕ ಬ್ರಹ್ಮ ರೂಪನನು
ಭಜಿಸುವೆನು ಭಜಿಸುವೆನು ಭಜಿಸುವೆನು ನಾನು
|
ವಿವರಣೆ :
ತಾರಕ ಬ್ರಹ್ಮನ ಶಾಶ್ವತ ಮಹಾ ಸ್ವರೂಪವುಳ್ಳ ರೂಪವು ಶಂಕರ
ಭಗವಾನನನ್ನು ಕಾಶಿಯಲ್ಲಿರುವ ಭಕ್ತನ ಅಂತ್ಯ ಕಾಲದ ಸಮಯದಲ್ಲಿ ಕಿವಿಯಲ್ಲಿ
" ರಾಮ, ರಾಮ, ರಾಮ
" ಎಂದು ಗುನುಗುನಿಸುವಂತೆ ಪ್ರೇರೇಪಿಸುತ್ತದೆ,
ಆ ಬ್ರಹ್ಮನಿಗೆ ಭಕ್ತಿ ಪೂರ್ವಕವಾಗಿ ನಮಸ್ಕರಿಸುತ್ತೇನೆ.
|
ಶ್ಲೋಕ - 3 - ಸಂಸ್ಕೃತದಲ್ಲಿ
:
ಪುರಃ ಪ್ರಾಂಜಲೀನಾಂಜನೇಯಾದಿ ಭಕ್ತಾನ್
ಸ್ವಚಿನ್ಮುದ್ರಯಾ ಭದ್ರಯಾ ಬೋಧಯಂತಮ್
ಭಜೇsಹಂ ಭಜೇsಹಂ ಸದಾ
ರಾಮಚಂದ್ರಂ
ತ್ವದನ್ಯಂ ನ ಮನ್ಯೇ ನ ಮನ್ಯೇ ನ ಮನ್ಯೇ
|
ಕನ್ನಡದಲ್ಲಿ :
ಮುಂದೆ ಕೈಮುಗಿದಾಂಜನೇಯಾದಿ ಭಕ್ತರಿಗೆ
ಚಿನ್ಮುದ್ರೆಯಿಂ ಮಂಗಳ ಬೋಧೆಯೀವ
ಶ್ರೀರಾಮ ಚಂದ್ರನನು ಭಜಿಪೆಂ ಸದಾ ನಾಂ
ಬೇರೊಂದನೊಲ್ಲೆ ನಾನೊಲ್ಲೆ ನಾನೊಲ್ಲೆ
|
ವಿವರಣೆ :
ಯಾರನ್ನು ಸದಾ ನಮಸ್ಕರಿಸುವ ಆಂಜನೇಯ ಹಾಗೂ ಅನೇಕ ಭಕ್ತರು
ಸದಾ ಸುತ್ತುವರೆದಿರುವರೋ ಮತ್ತು ಶಾಶ್ವತ ಜ್ಞಾನವನ್ನು ಅದರ ಲಾಂಛನವನ್ನು ತನ್ನ ಹಸ್ತದಲ್ಲಿ ಇರಿಸಿಕೊಂಡು
ಬೋಧಿಸುತ್ತಿರುವನೋ ಆ ಶ್ರೀ ರಾಮಚಂದ್ರನನ್ನು ಸದಾ ಭಕ್ತಿಯಿಂದ ನಮಸ್ಕರಿಸುವೆ ಹಾಗೂ ಅವನನ್ನು ಹೊರತು
ಪಡಿಸಿ ಬೇರಾರನ್ನೂ ಕನಸಿನಲ್ಲೂ ಯೋಚಿಸಲಾರೆ.
|
ಶ್ಲೋಕ - 4 - ಸಂಸ್ಕೃತದಲ್ಲಿ
:
ಯದಾ ಮತ್ಸಮೀಪಂ ಕೃತಾಂತಸ್ಸಮೇತ್ಯ
ಪ್ರಚಂಡೈಶ್ಚ ಕೋಪೈರ್ಭಟೈರ್ಭೀಷಯೇನ್ಮಾಮ್
ತದಾವಿಷ್ಕರೋಷಿ ತ್ವದೀಯಂ ಸ್ವರೂಪಂ
ಸದಾಪತ್ಪ್ರಣಾಶಂ ಸಕೋದಂಡಬಾಣಮ್
|
ಕನ್ನಡದಲ್ಲಿ :
ಯಮರಾಜನೊಂದಿಗೇ ಭಟರು ಬಳಿ ಬಂದು
ಅತ್ಯುಗ್ರಕೋಪದಿಂ ಹೆದರಿಸಲು ನನ್ನ
ಆಪತ್ತುಗಳನೆಲ್ಲ ನಾಶಗೈಯುವ ನಿನ್ನ
ಕೋದಂಡ ಬಾಣಗಳ ಶಕ್ತಿ ತೋರಿಸುವೆ
|
ವಿವರಣೆ :
ಕಾಲ ಯಮನು ತನ್ನ ಕೋಪೋದ್ರಿಕ್ತ ಬಟರೊಂದಿಗೆ ನನ್ನೆದುರು ಬಂದು
ನನ್ನನ್ನು ಹೆದರಿಸುವಾಗ ಹೇ ರಾಮಚಂದ್ರನೇ ಆ ಸಮಯದಲ್ಲಿ ನೀನು ನಿನ್ನ ಕೋದಂಡ ಬಾಣದೊಡನೆ ನನ್ನೆದುರು
ಪ್ರತ್ಯಕ್ಷನಾಗು, ಆಗ ಅದು ನನ್ನಲ್ಲಿನ ಎಲ್ಲ ಭಯವನ್ನೂ ಹೋಗಲಾಡಿಸು ವುದು.
|
ಶ್ಲೋಕ - 5 - ಸಂಸ್ಕೃತದಲ್ಲಿ
:
ನಿಜೇ ಮಾನಸೇ ಮಂದಿರೇ ಸನ್ನಿಧೇಹಿ
ಪ್ರಸೀದ ಪ್ರಸೀದ ಪ್ರಭೋ ರಾಮಚಂದ್ರ
ಸಸೌಮಿತ್ರಿಣಾ ಕೈಕಯೀನಂದನೇನ
ಸ್ವಶಕ್ತ್ಯಾನುಭಕ್ತ್ಯಾ ಚ ಸಂಸೇವ್ಯಮಾನ
|
ಕನ್ನಡದಲ್ಲಿ :
ಸೌಮಿತ್ರಿ ಭರತನಿಂ ಭಕ್ತಗಣದಿಂದ
ಸೀತೆಯೊಂದಿಗೆ ಸೇವೆಗೊಳ್ಳುತಿಹ ಸ್ವಾಮಿ
ಎನ್ನ ಮಾನಸಮಂದಿರದಲ್ಲಿ ನೆಲೆಸು
ಕೃಪೆದೋರು ಕೃಪೆದೋರು ಶ್ರೀರಾಮಚಂದ್ರ
|
ವಿವರಣೆ :
ಹೇ ರಾಮಚಂದ್ರನೇ ನನ್ನ ನೈಜ ಮನದಲ್ಲಿ ನೀನು ಹಾಗೂ ನಿನ್ನ
ಸಹೋದರರಾದ ಲಕ್ಷ್ಮಣ, ಭರತ, ಶತೃಘ್ನರೊಂದಿಗೆ
ಬಂದು ಅಲ್ಲೇ ನೆಲೆಸಿ ನಿನ್ನ ಅಪಾರವಾದ ಶಕ್ತಿಯಿಂದ ನಿನ್ನ ಭಕ್ತನಾದ ನನಗೆ ಸಹಾಯಮಾಡಿ ನನ್ನನ್ನು
ಸಂತೋಷಪಡಿಸು.
|
ಶ್ಲೋಕ - 6 - ಸಂಸ್ಕೃತದಲ್ಲಿ :
ಸ್ವಭಕ್ತಾಗ್ರಗಣ್ಯೈಃ ಕಪೀಶೈರ್ಮಹೀಶೈ-
ರನೀಕೈರನೇಕೈಶ್ಚ ರಾಮ ಪ್ರಸೀದ
ನಮಸ್ತೇ ನಮೋsಸ್ತ್ವೀಶ ರಾಮ
ಪ್ರಸೀದ
ಪ್ರಶಾಧಿ ಪ್ರಶಾಧಿ ಪ್ರಕಾಶಂ ಪ್ರಭೋ ಮಾಮ್
|
ಕನ್ನಡದಲ್ಲಿ :
ಕಪಿಶ್ರೇಷ್ಟರೊಡಗೂಡಿ ಭಕ್ತರಾಜರೊಡಗೂಡಿ
ಅನೇಕಾನೇಕ ಸೇನೆಯೊಡನೆ ಮೈದೋರು
ನಮಸ್ತೇ ನಮೋ ಒಡೆಯ ರಾಮ ಮೈದೋರು
ಶಿಕ್ಷಣವನೀ ಜ್ಞಾನ ನೀಡೆನಗೆ ಸ್ವಾಮಿ
|
ವಿವರಣೆ :
ಮಹಾ ದೈವಭಕ್ತರು, ಮಹಾ ವಾನರ ರಾಜರುಗಳು,
ಹಾಗೂ ಅನೇಕ ರಾಜ, ಮಹಾರಾಜರುಗಳು ಸುತ್ತುವರೆದಿರುವ ಓ
ರಾಮಚಂದ್ರನೇ ! ನಿನಗೆ ನನ್ನ ಭಕ್ತಿಪೂರ್ವಕ ನಮಸ್ಕಾರಗಳು, ನನ್ನಲ್ಲಿ ಸುಪ್ರೀತನಾಗು, ಓ ದೇವನೇ ! ನನ್ನನ್ನು ಆಶೀರ್ವದಿಸು.
|
ಶ್ಲೋಕ - 7 - ಸಂಸ್ಕೃತದಲ್ಲಿ :
ನಮಸ್ಸಚ್ಚಿದಾನಂದರೂಪಾಯ ತಸ್ಮೈ
ನಮೋ ದೇವದೇವಾಯ ರಾಮಾಯ ತುಭ್ಯಮ್
ನಮೋ ಜಾನಕೀಜೀವಿತೇಶಾಯ ತುಭ್ಯಂ
ನಮಃ ಪುಂಡರೀಕಾಯತಾಕ್ಷಾಯ ತುಭ್ಯಮ್
|
ಕನ್ನಡದಲ್ಲಿ :
ನಮೋ ಸಚ್ಚಿದಾನಂದ ರೂಪೆ ನಿನಗೆ
ನಮೋ ದೇವ ದೇವ ಸಿರಿರಾಮ ನಿನಗೆ
ನಮೋ ಜಾನಕಿಯ ಜೀವದೊಡೆಯ ನಿನಗೆ
ನಮೋ ಕಮಲವನು ಪೋಲ್ವ ಕಣ್ಣವನೆ ನಿನಗೆ
|
ವಿವರಣೆ :
ಸಚ್ಚಿದಾನಂದ ಸ್ವರೂಪನಾದ ದೇವನಿಗೆ ವಂದನೆಗಳು, ಜಾನಕಿರಮಣನಾದ ಭಗವಾನ್ ರಾಮಚಂದ್ರನಿಗೆ, ಹಾಗೂ ಉದರದಲ್ಲಿ ಪದ್ಮವನ್ನು
ಧರಿಸಿರುವ ರಾಮನಿಗೆ ನಮಸ್ಕಾರಗಳು.
|
ಶ್ಲೋಕ - 8 - ಸಂಸ್ಕೃತದಲ್ಲಿ :
ನಮೋ ಭಕ್ತಿಯುಕ್ತಾನುರಕ್ತಾಯ ತುಭ್ಯಂ
ನಮಃ ಪುಣ್ಯಪುಂಜೈಕಲಭ್ಯಾಯ ತುಭ್ಯಮ್
ನಮೋ ವೇದವೇದ್ಯಾಯ ಚಾದ್ಯಾಯ ಪುಂಸೇ
ನಮಃ ಸುಂದರಾಯೇಂದಿರಾವಲ್ಲಭಾಯ
|
ಕನ್ನಡದಲ್ಲಿ :
ಭಕ್ತರಲಿ ಅನುರಕ್ತ ನಿನಗೆ ನಮನ
ಪುಣ್ಯಬಲದಿಂದಷ್ಟೆ ಲಭಿಸುವನೆ ನಮನ
ವೇದದಿಂ ತಿಳಿವವನೆ ಆದಿಪುರುಷನೆ ನಮನ
ಸುಂದರನೆ ಇಂದಿರಾವಲ್ಲಭನೆ ನಮನ
|
ವಿವರಣೆ :
ಭಕ್ತರನ್ನು ಪ್ರೀತಿಸುವ ಭಗವಂತನಿಗೆ ನಮಸ್ಕಾರಗಳು, ಪುಣ್ಯಕಾರ್ಯಗಳ ಮೂಲಕ ಮಾತ್ರ ಹೊಂದಬಹುದಾದ ಆ ದೇವನಿಗೆ ಅನಂತ ಪ್ರಣಾಮಗಳು. ಯುಗದ ಆದಿಪುರುಷ ಹಾಗೂ ವೇದಗಳ ದೈವನಿಗೆ ಭಕ್ತಿಪೂರ್ವಕ ವಂದನೆಗಳು. ಸೌಂದರ್ಯದ ಪ್ರತಿರೂಪ ಹಾಗೂ ಜನಕರಾಜನ ಪುತ್ರಿಯ ರಮಣನಿಗೆ ಅನೇಕ ನಮಸ್ಕಾರಗಳು.
|
ಶ್ಲೋಕ - 9 - ಸಂಸ್ಕೃತದಲ್ಲಿ :
ಶೀಲಾsಪಿ ತ್ವದಂಘ್ರಿಕ್ಷಮಾಸಂಗಿರೇಣು-
ಪ್ರಸಾದಾದ್ಧಿ ಚೈತನ್ಯಮಾಧತ್ತ
ರಾಮ
ನರಸ್ತ್ವತ್ಪದದ್ವಂದ್ವಸೇವಾವಿಧಾನಾತ್
ಸುಚೈತನ್ಯಮೇತೀತಿ ಕಿಂ ಚಿತ್ರಮತ್ರ
|
ಕನ್ನಡದಲ್ಲಿ :
ಓ ರಾಮ ನಿನಪಾದ ಧೂಳ ದೆಸೆಯಿಂದ
ಚೈತನ್ಯ ಪಡೆದಿತ್ತು ಶಿಲೆ ಕೂಡ ನೋಡ
ಆ ಪಾದಯುಗ್ಮವನು ಸೇವಿಸುತ ನರನು
ಶಕ್ತಿಯನು ಪಡೆವನೆನಲೇನು ಸೋಜಿಗವು
|
ವಿವರಣೆ :
ಹೇ ರಾಮಚಂದ್ರನೇ ! ಕೇವಲ ನಿನ್ನ
ಪಾದ ಧೂಳಿನಿಂದ ಸಾಮಾನ್ಯ ಬಂಡೆಯು ಜೀವವನ್ನು ಮರಳಿ ಪಡೆಯಿತು, ನಿನಗೆ
ನಮಸ್ಕರಿಸಿ ನಿನ್ನ ಪಾದ ಸೇವೆಯಿಂದ ಭಕ್ತರಿಗೆ ಮುಕ್ತಿದೊರಕಿದರೆ ಅದರಲ್ಲಿ ಆಶ್ಚರ್ಯಕರವಾದದ್ದು
ಏನು?
|
ಶ್ಲೋಕ - 10 - ಸಂಸ್ಕೃತದಲ್ಲಿ :
ಪವಿತ್ರಂ ಚರಿತ್ರಂ ವಿಚಿತ್ರಂ ತ್ವದೀಯಂ
ನರಾ ಯೇ ಸ್ಮರಂತ್ಯನ್ವಹಂ ರಾಮಚಂದ್ರ
ಭವಂತಂ ಭವಾಂತಂ ಭರಂತಂ ಭಜಂತೋ
ಲಭಂತೇ ಕೃತಾಂತಂ ನ ಪಶ್ಯಂತ್ಯತೋsoತೇ
|
ಕನ್ನಡದಲ್ಲಿ :
ಪವಿತ್ರವು ವಿಚಿತ್ರವು ನಿನ್ನಯ ಚರಿತ್ರೆ
ಸಂಸಾರ ನಾಶಕನೆ ಪೋಷಕನೆ ರಾಮ
ದಿವರಾತ್ರಿಯಲಿ ನರನು ನೆನೆಯುತ್ತ ನಿನ್ನ
ಭಜಿಸುತಿರೆ ಮರೆವನವ ಯಮನ ಭಯವನ್ನ
|
ವಿವರಣೆ :
ಹೇ ರಾಮನೇ ! ನಿನ್ನ ಆಶ್ಚರ್ಯಕರವಾದ ಚರಿತ್ರೆಯನ್ನು
ಸದಾ ನೆನಸುವ ಭಕ್ತರು ಮತ್ತು ನಿನ್ನ ನಾಮವನ್ನು ಭಜಿಸುವವರು, ದುಃಖದಿಂದ
ಕೂಡಿದ ಸಾಂಸಾರಿಕ ಜೀವನವನ್ನು ನಾಶಪಡಿಸುವ ನಿನ್ನನ್ನು ಪೂಜಿಸಿ ತಮ್ಮ ಅಂತ್ಯ ಕಾಲದಲ್ಲಿ ತಾವು ಇಚ್ಚಿಸಿದ್ದನ್ನು
ಪಡೆಯುವರು ಹಾಗೂ ಯಮನ ಭಯವನ್ನು ನಿವಾರಿಸಿಕೊಳ್ಳುವರು.
|
ಶ್ಲೋಕ - 11 - ಸಂಸ್ಕೃತದಲ್ಲಿ
:
ದಶಗ್ರೀವಮುಗ್ರಂ ಸಪುತ್ರಂ ಸಮಿತ್ರಂ
ಸರಿದ್ದುರ್ಗಮಧ್ಯಸ್ಥರಕ್ಷೋಗಣೇಶಮ್
ಭವಂತಂ ವಿನಾ ರಾಮ ವೀರೋ ನರೋ ವಾ-
sಸುರೋ ವಾsಮರೋ
ವಾ ಜಯೇತ್ಕಸ್ತ್ರಿಲೋಕ್ಯಾಮ್
|
ಕನ್ನಡದಲ್ಲಿ :
ಪುತ್ರಮಿತ್ರರ ಕೂಡಿ ಶರಧಿಕೋಟೆಯಳಿದ್ದ
ರಾಕ್ಷಸಗಣೇಶ್ವರನ ಉಗ್ರ ದಶಮುಖನ
ನಿನ್ನ ಬಿಟ್ಟಾವ ಕಲಿ ನರರು ಸುರರಸುರರು
ಗೆಲಲು ಸಾಧ್ಯವು ರಾಮ ಮೂಲೋಕದಲ್ಲಿ
|
ವಿವರಣೆ :
ಓ ರಾಮಚಂದ್ರನೇ ! ನಿನ್ನನ್ನು
ಬಿಟ್ಟು ವಿಶ್ವದಲ್ಲಿ ಬೇರಾರೂ ಶೂರರೂ ಅಥವಾ ವೀರರೂ ಅಥವಾ ದೇವತೆಗಳಿಗೂ, ದಶಮುಖ ರಾವಣ ಹಾಗೂ ಅವನ ರಾಕ್ಷಸ ಗಣಗಳನ್ನು ಸಂಹಾರ ಮಾಡಲು ಸಾಧ್ಯವೇ ?
|
ಶ್ಲೋಕ - 12 - ಸಂಸ್ಕೃತದಲ್ಲಿ :
ಸದಾ ರಾಮ ರಾಮೇತಿ ರಾಮಾಮೃತಂ ತೇ
ಸದಾರಾಮಮಾನಂದನಿಷ್ಯಂದಕಂದಮ್
ಪಿಬಂತಂ ನಮಂತಂ ಸುದಂತಂ ಹಸಂತಂ
ಹನೂಮಂತಮಂತರ್ಭಜೇ ತಂ ನಿತಾಂತಮ್
|
ಕನ್ನಡದಲ್ಲಿ :
ಶಾಂತಿ ಆನಂದಗಳ ಹೊಮ್ಮಿಸುವ ದಿವ್ಯ
ರಾಮಾಮೃತವನು ಸದಾ ರಾಮರಾಮೆನುತ
ಸೇವಿಸುತ ನಗುನಗುತ ನಮಿಸುತಿಹ ಸುದತಿ
ಆ ಹನುಮನನು ಭಜಿಪೆ ಮನದಲ್ಲಿ ಸತತ
|
ವಿವರಣೆ :
ಹೇ ರಾಮಚಂದ್ರ ಪ್ರಭುವೇ ! ನಿನ್ನನ್ನು ಸದಾ " ರಾಮ, ರಾಮ
" ಎಂದು ಭಜಿಸಿ ರಾಮನಾಮಾಮೃತವನ್ನು ಸದಾ ಕುಡಿಯುತ್ತಾ ಸದಾ ಆನಂದದ
ಕಡಲಿನಲ್ಲಿನ ಅಲೆಗಳಲ್ಲಿ ಮೀಯುತ್ತಾ ನಿನಗೆ ಪದೇ ಪದೇ ನಮಸ್ಕರಿಸುತ್ತಾ ಸದಾ ಹಸನ್ಮುಖಿಯಾಗಿರುವ
ಹುನುಮನನ್ನು ನಾನು ಸದಾ ಪೂಜಿಸುತ್ತೇನೆ.
|
ಶ್ಲೋಕ - 13 - ಸಂಸ್ಕೃತದಲ್ಲಿ
:
ನಮಸ್ತೇ ಸುಮಿತ್ರಾಸುಪುತ್ರಾಭಿವಂದ್ಯ
ನಮಸ್ತೇ ಸದಾ ಕೈಕಯೀನಂದನೇಡ್ಯ
ನಮಸ್ತೇ ಸದಾ ವಾನರಾಧೀಶವಂದ್ಯ
ನಮಸ್ತೇ ನಮಸ್ತೇ ಸದಾ ರಾಮಚಂದ್ರ
|
ಕನ್ನಡದಲ್ಲಿ :
ಸುಮಿತ್ರಾ ಸುಪುತ್ರನಿಂ ವಂದಿತನ ನಮಿಪೆ
ಕೈಕೇಯಿ ನಂದನನು ಸ್ತುತಿಸುವನ ನಮಿಪೆ
ಸದಾ ವಾನರಾಧೀಶ ನಮಿಸುವನ ನಮಿಪೆ
ನಮಿಪೆ ನಿನ್ನನು ನಮಿಪೆ ಸದಾ ರಾಮಚಂದ್ರ
|
ವಿವರಣೆ :
ಸುಮಿತ್ರಾನಂದನನೆಂದು ಪೂಜಿಸಲ್ಪಡುವ ಶ್ರೀರಾಮನಿಗೆ ನಮಸ್ಕಾರಗಳು, ಕೈಕೇಯಿ ಪುತ್ರನಾದ ಭರತನಿಂದ ಸದಾ ಗೌರವಿಸಲ್ಪಡುವ ಶ್ರೀ ರಾಮಚಂದ್ರ ಪ್ರಭುವಿಗೆ ಭಕ್ತಿಪೂರ್ವಕ
ನಮನಗಳು, ವಾನರ ರಾಜನ ಸದಾ ಸಖನಾದ ಶ್ರೀರಾಮನಿಗೆ ಅನೇಕ ವಂದನೆಗಳು.
ಹೇ ರಾಮಚಂದ್ರ ಪ್ರಭುವೇ ನಿನಗೆ ಸದಾ ವಂದನೆಗಳು.
|
ಶ್ಲೋಕ - 14 - ಸಂಸ್ಕೃತದಲ್ಲಿ
:
ಪ್ರಸೀದ ಪ್ರಸೀದ ಪ್ರಚಂಡ ಪ್ರತಾಪ
ಪ್ರಸೀದ ಪ್ರಸೀದ ಪ್ರಚಂಡಾರಿಕಾಲ
ಪ್ರಸೀದ ಪ್ರಸೀದ ಪ್ರಪನ್ನಾನುಕಂಪಿನ್
ಪ್ರಸೀದ ಪ್ರಸೀದ ಪ್ರಭೋರಾಮಚಂದ್ರ
|
ಕನ್ನಡದಲ್ಲಿ :
ಪ್ರಚಂಡ ಪ್ರತಾಪಿ ಕೃಪೆದೋರು ಕೃಪೆದೋರು
ಅತ್ಯುಗ್ರ ಶತ್ರುಯಮ ಕೃಪೆದೋರು ಕೃಪೆದೋರು
ಮೊರೆಹೊಕ್ಕವರ ಕಾಯ್ವ ಕೃಪೆದೋರು ಕೃಪೆದೋರು
ಪ್ರಭು ರಾಮಚಂದಿರನೆ ಕೃಪೆದೋರು ಕೃಪೆದೋರು
|
ವಿವರಣೆ :
ನಿನ್ನ ಕರುಣೆಯ ವರ್ಷಧಾರೆಯನ್ನು ಹರಿಸು ಅಧಿಕ ಗೌರವವುಳ್ಳ, ಹೇ ದೇವನೆ ! ಶತ್ರುಗಳಿಗೆ ಯಮಪ್ರಾಯನಾದವನೇ ಕರುಣೆದೋರು,
ಭಕ್ತರಲ್ಲಿ ಅಧಿಕ ಕರುಣೆಯುಳ್ಳವನೇ ಕೃಪೆತೋರು, ಕೃಪೆತೋರು.
ಓ ರಾಮಚಂದ್ರ ಪ್ರಭುವೇ ಕೃಪೆತೋರು, ಕೃಪೆತೋರು.
|
ಶ್ಲೋಕ - 15 - ಸಂಸ್ಕೃತದಲ್ಲಿ :
ಭುಜಂಗಪ್ರಯಾತಂ ಪರಂ ವೇದಸಾರಂ
ಮುದಾ ರಾಮಚಂದ್ರಸ್ಯ ಭಕ್ತ್ಯಾ ಚ ನಿತ್ಯಮ್
ಪಠನ್ ಸಂತತಂ ಚಿಂತಯನ್ ಸ್ವಾಂತರಂಗೇ
ಸ ಏವ ಸ್ವಯಂ ರಾಮಚಂದ್ರಃ ಸ ಧನ್ಯಃ
|
ಕನ್ನಡದಲ್ಲಿ :
ವೇದಸಾರವು ಶ್ರೇಷ್ಠವೀ ಭುಜಂಗಪ್ರಯಾತವನು
ಶ್ರೀರಾಮ ಸ್ತೋತ್ರವನು ಹರುಷದಲಿ ನಿತ್ಯ
ಪಠಿಸುತ್ತ ನಿನ್ನೊಳಗೆ ನಿರುತ ನೆನೆವಾತ
ನಿಜದಿ ರಾಮಚಂದಿರನಹನು ಬಹುಧನ್ಯನಾತ
|
ವಿವರಣೆ :
ರಾಮಚಂದ್ರಪ್ರಭುವಿನ ವೇದಗಳ ಸಾರವಾದ ಭುಜಂಗ ಪ್ರಯಾತ ಸ್ತೋತ್ರವನ್ನು
ಪ್ರತಿದಿನವೂ ಮನದಲ್ಲಿ ಸದಾ ಧ್ಯಾನಿಸುವವರಿಗೆ, ಪಠಿಸುವವರಿಗೆ ರಾಮಚಂದ್ರನ ಆಶೀರ್ವಾದವು
ಸದಾ ಸಿಗುವುದು ಹಾಗೂ ಅವನೇ ಧನ್ಯ.
|
ಲೇಖನದ ಮೂಲಗಳು:
ಸಂಸ್ಕೃತ ಶ್ಲೋಕಗಳು :
sanskritdocument.org
ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ ಅವರ
“ಸವಿಗನ್ನಡ ಸ್ತೋತ್ರಚಂದ್ರಿಕೆ “
ವಿವರಣೆ: sanskritdocument.org – ಆಂಗ್ಲ
ಭಾಷೆಯಲ್ಲಿನ ವಿವರಣೆಯ ಭಾವಾರ್ಥವನ್ನು ಕನ್ನಡದಲ್ಲಿ ಪ್ರಸ್ತುತಿ – ಗುರುಪ್ರಸಾದ್ ಹಾಲ್ಕುರಿಕೆ
|
No comments:
Post a Comment